ಲೋಕಲ್ ನ್ಯೂಸ್
ಸಿಂಸಾರುಲ್ ಹಕ್ ಆರ್ಲಪದವು ಇವರಿಗೆ ಭಾವೈಕ್ಯತಾ ಕಾವ್ಯ ಸಿರಿ ಪ್ರಶಸ್ತಿ ಪ್ರಧಾನ
ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತು ದ.ಕ ಜಿಲ್ಲಾ ವತಿಯಿಂದ ಮಂಗಳೂರಿನ ಪ್ರತಿಷ್ಠಿತ ಜೆಪ್ಪು ಮರಿಯಾ ಜಯಂತಿ ಸಭಾಂಗಣದಲ್ಲಿ ನಡೆಸಿದ ಭಾವೈಕ್ಯ ಸಮ್ಮಿಲನ ಕವಿಗೋಷ್ಠಿ ಹಾಗೂ ಕರ್ನಾಟಕ ಘನ ಸರಕಾರದ ನೂತನ ವಿಧಾನ ಸಭಾಧ್ಯಕ್ಷರಿಗೆ ಮತ್ತು ಹಲವಾರು ಸಾಧಕರಿಗೆ ನೀಡಲ್ಪಡುವ ಸನ್ಮಾನ ಸಮಾರಂಭದಲ್ಲಿ ಗಡಿನಾಡ ಧ್ವನಿ ಪತ್ರಿಕೆಯ ಉಪಸಂಪಾದಕರು ಕವಿಗಳು ಆದ ಮುಹಮ್ಮದ್ ಸಿಂಸಾರುಲ್ ಹಕ್ ಆರ್ಲಪದವು ರವರಿಗೆ ಭಾವೈಕ್ಯತಾ ಕಾವ್ಯ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಗಣ್ಯಾತಿ ಗಣ್ಯರು, ನೂರಾರು ಕವಿಗಳು ಉಪಸ್ಥಿತರಿದ್ದರು.






